ಇ.ಕೆ ಪ್ರೊಡಕ್ಷನ್ಸ್ ರವರ ‘ಮುಂಗಾರು ಮಳೆ - ೨ ಚಿತ್ರದ ಹಾಡುಗಳ ಸ್ವರ ಸಂಯೋಜನೆಯ ಪೂಜಾ ಕಾರ್ಯಕ್ರಮವು ಮೇ೨೯ರ ಶುಕ್ರವಾರ ಬೆಳಗ್ಗೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಸ್ಟುಡಿಯೋದಲ್ಲಿ ನೆರವೇರಿತು. ಬಹಳ ಉತ್ಸಾಹದಿಂದ ಮುಂಗಾರು ಮಳೆಯ ಮತ್ತೊಂದು ಹೊಸ ಮೋಡಿಯನ್ನು ಪ್ರೇಕ್ಷಕರಿಗೆ ಕಟ್ಟಿಕೊಡುವ ಹುಮ್ಮಸ್ಸಿನಿಂದ ನಿರ್ದೇಶಕ ಶಶಾಂಕ್, ನಿರ್ಮಾಪಕ ಜಿ.ಗಂಗಾಧರ್, ನಾಯಕ ನಟ ಗೋಲ್ಡನ್ ಸ್ಟಾರ್ ಗಣೇಶ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಹಿತ ಇಡೀ ಚಿತ್ರತಂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಜಿ.ಗಂಗಾಧರ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಶಶಾಂಕ್ ನಿರ್ದೇಶಿಸುತ್ತಿದ್ದಾರೆ. ಶೇಖರ್ ಚಂದ್ರು ಛಾಯಾಗ್ರಹಣ ಇನ್ನಿತರ ಹೆಸರಾಂತ ತಂತ್ರಜ಼್ಞರನ್ನೊಳಗೊಂಡ ‘ಮುಂಗಾರು ಮಳೆ - ೨ ಚಿತ್ರದಲ್ಲಿ ಗೋಲ್ಡನ್ಸ್ಟಾರ್ ಗಣೇಶ್, ಕ್ರೇಜಿ ಸ್ಟಾರ್ ರವಿಚಂದ್ರನ್ ಸಹಿತ ಪ್ರಮುಖ ಕಲಾವಿದರು ನಟಿಸುತ್ತಿದ್ದಾರೆ. ಸದ್ಯ ಇಡೀ ಚಿತ್ರತಂಡ ಮುಂಗಾರು ಮಳೆಯ ಆಗಮನಕ್ಕೆಕಾಯುತ್ತಿದ್ದು ಅತೀ ಶೀಘ್ರದಲ್ಲೇ ಚಿತ್ರೀಕರಣ ಆರಂಭಗೊಳ್ಳಲಿದೆ.